Breaking News

ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಗೀತೆ ರಾಮಮಂದಿರ ಪ್ರಾಣಪ್ರತಿಷ್ಠೆ ವೇಳೆ ಪ್ರಸಾರ

Share News

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavar) ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ (Bengaluru) ವಾಸವಾಗಿರುವ ಗೀತೆ ರಚನೆಗಾರ ಡಾ.ಗಜಾನನ ಶರ್ಮಾ ರಚಿಸಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಗೀತೆ ಜ.22 ರಂದು ರಾಮಮಂದಿರ (Ram Mandir) ಪ್ರಾಣಪ್ರತಿಷ್ಠೆ ವೇಳೆ ಪ್ರಸಾರವಾಗಲಿದೆ.

ಇದನ್ನೂ ಓದಿ: ಬಂಟ್ವಾಳ : ವಗ್ಗ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಕಾಲೇಜು ವಿದ್ಯಾರ್ಥಿನಿ ಗಂಭೀರ..!

ಈ ಕುರಿತು ಅಯೋಧ್ಯೆ (Ayodhya) ಟ್ರಸ್ಟ್ ಎಕ್ಸ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ. ಈ ಕುರಿತು ಡಾ.ಗಜಾನನ ಶರ್ಮಾ ಸ್ಪಷ್ಟಪಡಿಸಿದ್ದು, ನಾನು ರಚಿಸಿದ ಹಾಡನ್ನು ರಾಮಮಂದಿರ ಟ್ರಸ್ಟ್‌ನವರು ತೆಗೆದುಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು.

ದಿಲ್ ಮಾಂಗೆ ಮೋರ್ ಟೈಟಲ್‌ನ ಪ್ರೇರಣೆಯಿಂದ ಹುಟ್ಟಿತು ಹಾಡು:
ಡಾ.ಗಜಾನನ ಶರ್ಮಾರವರಿಗೆ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ರಾಮಕಥೆಗಾಗಿ ಚಾತುರ್ಮಾಸದ ವೇಳೆ ಉತ್ತಮ ಗೀತ ರಚನೆ ಮಾಡಿಕೊಡುವಂತೆ ಹೇಳಿದ್ದರು. ಆದರೆ ಶರ್ಮರವರ ಕಾರ್ಯ ಒತ್ತಡದಿಂದ ರಚನೆ ಮಾಡಲಾಗಿರಲಿಲ್ಲ. ಒಮ್ಮೆ ಇವರು ಕಾರ್ಯ ನಿಮಿತ್ತ ಕೇರಳಕ್ಕೆ ಹೋದಾಗ ತಂಪು ಪಾನಿಯದ ಜಾಹಿರಾತಿನಲ್ಲಿ ದಿಲ್ ಮಾಂಗೆ ಮೋರ್ ಎಂದು ಬರೆದಿದ್ದನ್ನು ಓದಿದ ಇವರಿಗೆ ಈ ಟೈಟಲ್ ರಾಮನ ಕುರಿತು ಯಾಕಾಗಬಾರದು ಎಂದು ಅವರು ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂದು ಗೀತೆ ರಚಿಸಿದರು. ಈ ರಚನೆಯನ್ನು ಶ್ರೀಗಳಿಗೆ ತೋರಿಸಿದಾಗ ಅದನ್ನು ಮುಂದುವರೆಸಲು ಹೇಳಿದರು. ಹೀಗೆ ಈ ಗೀತೆ ರಚನೆಯಾಯ್ತು ಎಂದು ಅದರ ಮೂಲವನ್ನು ಶರ್ಮಾರವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೇಡಿಕೊಳ್ಳುತ್ತಿದ್ದರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ; ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

ಡಾ.ಗಜಾನನ ಶರ್ಮಾರವರು ರಾಮಕಥೆ ಮೂಲಕವೇ ಇಡೀ ದೇಶಕ್ಕೆ ಪರಿಚಿತರಾಗಿದ್ದಾರೆ. ಇವರು ರಚಿಸಿದ ಗೀತೆಗಳು ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಇದೀಗ ರಾಮನ ಸನ್ನಿಧಿಯಲ್ಲೇ ಅದರಲ್ಲೂ ಕನ್ನಡ ಭಾಷೆಯಲ್ಲಿ ಈ ಗೀತೆ ಪ್ರಸ್ತುತ ಪಡಿಸುತ್ತಿರುವುದು ಕನ್ನಡಿಗರ ಹೆಮ್ಮೆ ಎನಿಸಿದೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *