![ನಿರ್ಮಾಣ ಹಂತದ ಚರ್ಚ್ ನ ಸ್ಲ್ಯಾಬ್ ಕುಸಿದು ಬಿದ್ದು ಓರ್ವ ಕಾರ್ಮಿಕ ಸಾವು; ಹತ್ತು ಮಂದಿಗೆ ಗಾಯ](https://nimmondige24.com/wp-content/uploads/2024/01/118.jpg)
ಹೈದರ್ಬಾದ್, ಜ 08 :ನಿರ್ಮಾಣ ಹಂತದ ಚರ್ಚ್ ನ ಸ್ಲ್ಯಾ ಬ್ ಕುಸಿದು ಬಿದ್ದ ಪರಿಣಾಮ ಓರ್ವ ವಲಸೆ ಕಾರ್ಮಿಕ ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಂಗಳೂರು: ಖ್ಯಾತ ಸಾಹಿತಿ ಜಾನಪದ ತಜ್ಞ ಅಮೃತ ಸೋಮೇಶ್ವರ ಇನ್ನಿಲ್ಲ.!
ಜಿಲ್ಲೆಯ ಕೋಹಿರ್ನಲ್ಲಿ ನಿರ್ಮಾಣಗೊಳ್ಳುತಿದ್ದ ಚರ್ಚ್ ನ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಗುಂಪು ಸ್ಲ್ಯಾ ಬ್ ಕೆಲಸ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಅವಘಡ ಸಂಭವಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಮಾಹಿತಿ
ಈ ವೇಳೆ ಸ್ಲ್ಯಾಬ್ ಕಾರ್ಯ ನಡೆಸುತ್ತಿದ್ದ ಕೆಳ ಭಾಗದಲ್ಲಿ ಕೆಲ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಸ್ಲ್ಯಾಬ್ ಕುಸಿದು ಬೀಳುವ ವೇಳೆ ಕೆಳಗಡೆ ಇದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ ಸುಮಾರು ಹತ್ತು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ ಗಾಯಗೊಂಡರವರನ್ನು ಹತ್ತಿರದ ಆಸ್ಪತೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.