Breaking News

Nematsava

ಬಜ್ಪೆ : ಮುಸ್ಲಿಂ ಯುವಕನ ಮೈ ಮೇಲೆ ಬಂದ ದೈವ; 18 ವರ್ಷದ ಬಳಿಕ ನೇಮೋತ್ಸವಕ್ಕೆ ಮುಂದಾದ ಗ್ರಾಮಸ್ಥರು..!

ಬಜ್ಪೆ : ಮುಸ್ಲಿಂ ಯುವಕನ ಮೈ ಮೇಲೆ ಬಂದ ದೈವ; 18 ವರ್ಷದ ಬಳಿಕ ನೇಮೋತ್ಸವಕ್ಕೆ ಮುಂದಾದ ಗ್ರಾಮಸ್ಥರು..!

ಮಂಗಳೂರು: 18 ವರ್ಷದ ಮುಸ್ಲಿಂ ಯುವಕನ (Muslim Youth) ಮೈ ಮೇಲೆ ದೈವ ಆಹ್ವಾನೆಯಾದ ಘಟನೆಗೆ ಮಂಗಳೂರಿನ (Mangaluru) ಬಜ್ಪೆ ಸಮೀಪದ ಪೆರ್ಮುದೆ (Permude) ಸಾಕ್ಷಿಯಾಗಿದೆ. ಮೂವತ್ತು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪಡೆದುಕೊಂಡಿತ್ತು. ಭೂಸ್ವಾಧೀನದಲ್ಲಿ ಪಿಲಿಚಾಮುಂಡಿ ದೈವದ (Pilichamundi Daiva) ಗಡುವಾಡು ಸ್ಥಳ ಕಂಪನಿ ಪಾಲಾಗಿತ್ತು. ಆಗ ಭಕ್ತರು ದೈವವನ್ನು ಪೆರ್ಮುದೆಯ ಸೋಮನಾಥಧಾಮಕ್ಕೆ ಸ್ಥಳಾಂತರ ಮಾಡಿದ್ದರು. ಗಡು ಸ್ಥಳದಲ್ಲಿ ಹದಿನೆಂಟು ವರ್ಷಗಳಿಂದ ಆರಾಧನೆ ನಿಂತು ಹೋಗಿತ್ತು. ಆ…

    Read More