Breaking News

ಮಂಗಳೂರು ಲೋಕಸಭಾ ಕ್ಷೇತ್ರ: ವೀಕ್ಷಕರಾಗಿ ಮಧು ಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಳ್ಯ ಮೂಲದ ಯುವ ಒಕ್ಕಲಿಗ ಅಭ್ಯರ್ಥಿ?

Share News

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಗೊಂದಲ ಇನ್ನು ಬಗೆಹರಿದಿಲ್ಲ.

ಈ ನಡುವೆ ಕಾಂಗ್ರೆಸ್ ನ ಒಂದು ಮೂಲಗಳ ಪ್ರಕಾರ ಸುಳ್ಯ ಮೂಲದ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆ ಇರುವ ಪ್ರಬಲವಾಗಿರುವ ಒಕ್ಕಲಿಗ ಯುವ ಅಭ್ಯರ್ಥಿಯನ್ನು ಪಕ್ಷದಿಂದ ಅಭ್ಯರ್ಥಿಯಾಗಲು ಕಾಂಗ್ರೆಸ್ ರಣತಂತ್ರ ರೂಪಿಸಲು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪಕ್ಷದ ಉನ್ನತ ವಲಯದಲ್ಲಿ ರಣತಂತ್ರ ರೂಪಿಸುವ ಜವಾಬ್ದಾರಿಯ ಭಾಗವಾಗಿ ಚುನಾವಣಾ ತಜ್ಞರೊಂದಿಗೆ ಗಂಭೀರ ಮಾತುಕತೆಗಳು ನಡೆದಿದೆ ಎಂದು ವರದಿಯಾಗಿದೆ. ಯುವ ಅಭ್ಯರ್ಥಿ ಒಬ್ಬರ ಉಮೇದುಗಾರಿಕೆಯ ಬಗ್ಗೆ ರಣತಂತ್ರದ ಮಾತುಕತೆ ಜಾರಿಯಲ್ಲಿದೆ ಎಂದು ತಿಳಿದುಬಂದಿದೆ.

ಈ ನಡುವೆ ಜಿಲ್ಲೆಯ ವೀಕ್ಷಕರಾಗಿ ಸಚಿವ ಮಧು ಬಂಗಾರಪ್ಪ ರವರನ್ನು ನೇಮಕಗೊಳಿಸಲಾಗಿದೆ. ಅವರಿಗೆ ಸೂಕ್ತ ಅಭ್ಯರ್ಥಿ ಯಾರಾಗಬಹುದು ಎಂಬ ಮಾಹಿತಿಯನ್ನು ಕಲೆ ಹಾಕಲು ಕೆಪಿಸಿಸಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.


Share News

Leave a Reply

Your email address will not be published. Required fields are marked *