![ಮಂಗಳೂರು ಲೋಕಸಭಾ ಕ್ಷೇತ್ರ: ವೀಕ್ಷಕರಾಗಿ ಮಧು ಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಳ್ಯ ಮೂಲದ ಯುವ ಒಕ್ಕಲಿಗ ಅಭ್ಯರ್ಥಿ?](https://nimmondige24.com/wp-content/uploads/2023/09/WhatsApp-Image-2023-09-23-at-5.41.08-PM.jpeg)
ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಗೊಂದಲ ಇನ್ನು ಬಗೆಹರಿದಿಲ್ಲ.
ಈ ನಡುವೆ ಕಾಂಗ್ರೆಸ್ ನ ಒಂದು ಮೂಲಗಳ ಪ್ರಕಾರ ಸುಳ್ಯ ಮೂಲದ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆ ಇರುವ ಪ್ರಬಲವಾಗಿರುವ ಒಕ್ಕಲಿಗ ಯುವ ಅಭ್ಯರ್ಥಿಯನ್ನು ಪಕ್ಷದಿಂದ ಅಭ್ಯರ್ಥಿಯಾಗಲು ಕಾಂಗ್ರೆಸ್ ರಣತಂತ್ರ ರೂಪಿಸಲು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಕ್ಷದ ಉನ್ನತ ವಲಯದಲ್ಲಿ ರಣತಂತ್ರ ರೂಪಿಸುವ ಜವಾಬ್ದಾರಿಯ ಭಾಗವಾಗಿ ಚುನಾವಣಾ ತಜ್ಞರೊಂದಿಗೆ ಗಂಭೀರ ಮಾತುಕತೆಗಳು ನಡೆದಿದೆ ಎಂದು ವರದಿಯಾಗಿದೆ. ಯುವ ಅಭ್ಯರ್ಥಿ ಒಬ್ಬರ ಉಮೇದುಗಾರಿಕೆಯ ಬಗ್ಗೆ ರಣತಂತ್ರದ ಮಾತುಕತೆ ಜಾರಿಯಲ್ಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಜಿಲ್ಲೆಯ ವೀಕ್ಷಕರಾಗಿ ಸಚಿವ ಮಧು ಬಂಗಾರಪ್ಪ ರವರನ್ನು ನೇಮಕಗೊಳಿಸಲಾಗಿದೆ. ಅವರಿಗೆ ಸೂಕ್ತ ಅಭ್ಯರ್ಥಿ ಯಾರಾಗಬಹುದು ಎಂಬ ಮಾಹಿತಿಯನ್ನು ಕಲೆ ಹಾಕಲು ಕೆಪಿಸಿಸಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.