![ದೇವಸ್ಥಾನಗಳ ಆದಾಯ ಅದೇ ಕ್ಷೇತ್ರದ ಅಭಿವೃದ್ಧಿಗೆ: ಸಚಿವ ರಾಮಲಿಂಗ ರೆಡ್ಡಿ](https://nimmondige24.com/wp-content/uploads/2023/10/86.jpg)
ಬೆಳ್ತಂಗಡಿ: ದೇವಸ್ಥಾನಗಳ ಒಂದು ಪೈಸೆಯನ್ನೂ ಬೇರೆ ಕಡೆ ವ್ಯಯ ಮಾಡಲು ಮಾಡಲು ಸಾಧ್ಯವಿಲ್ಲ. ಎಲ್ಲವನ್ನೂ ಆಯಾ ದೇವಸ್ಥಾನದ ಅಭಿವೃದ್ಧಿಗೇ ಬಳಸಲಾಗುತ್ತದೆ. ಈ ಬಗ್ಗೆ ಅಪಪ್ರಚಾರ ಸಲ್ಲದು ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಇದನ್ನೂ ಓದಿ: ನಾಪತ್ತೆಯಾಗಿದ್ದ ವ್ಯಕ್ತಿ ಬಿ.ಸಿ.ರೋಡ್ನ ಬಸ್ನಿಲ್ದಾಣದಲ್ಲಿ ಅಸ್ವಸ್ಥರಾಗಿ ಪತ್ತೆ; ಮೃತ್ಯು!
ಧರ್ಮಸ್ಥಳದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಸರಕಾರ ಆರಂಭಿಸಿದ್ದ “ಸಪ್ತಪದಿ’ ಯೋಜನೆಯನ್ನು ಮುಂದುವರಿಸುವ ಜತೆಗೆ ಕಾಶೀ ಯಾತ್ರೆ ಸಹಿತ ತೀರ್ಥ ಯಾತ್ರೆಗೂ ರಾಜ್ಯ ಸರಕಾರದಿಂದ ಸಹಕಾರ ನೀಡಲಾಗುವುದು ಎಂದರು.
ಇದನ್ನೂ ಓದಿ: ಐತಿಹಾಸಿಕ 34 ನೇ ವರ್ಷದ ‘ಮಂಗಳೂರು ದಸರಾ’ ಅಕ್ಟೋಬರ್ 15ರಿಂದ ಪ್ರಾರಂಭ!
4 ಸಾವಿರ ಬಸ್ ಖರೀದಿ, 13 ಸಾವಿರ ಸಿಬಂದಿ ನೇಮಕ: ಕೆಎಸ್ಸಾರ್ಟಿಸಿ ಹಾಗೂ ಇತರ ನಿಗಮಗಳಿಗೆ 13 ಸಾವಿರ ಸಿಬಂದಿ ನೇಮಕ ಹಾಗೂ 4 ಸಾವಿರ ಬಸ್ಗಳನ್ನು ಖರೀದಿಸುವುದಾಗಿ ಇದೇ ವೇಳೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.