![ಕೃಷಿ ಅಧಿಕಾರಿ ಸೇರಿ ಈಜಲು ತೆರಳಿದ್ದ ಇಬ್ಬರು ನೀರುಪಾಲು..!](https://nimmondige24.com/wp-content/uploads/2023/09/224.jpg)
ಸಾಗರ: ಜೋಗ್ ಫಾಲ್ಸ್ ಪ್ರವಾಸಕ್ಕೆ ಭಾನುವಾರ ತೆರಳಿದ್ದ ಸಾಗರದ ಇಬ್ಬರು ಜೋಗದ ಸಮೀಪದ ದೇವಿಗುಂಡಿ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಸಾಗರದ ಕೃಷಿ ಇಲಾಖೆಯ ಅಧಿಕಾರಿ ಕೆ.ಟಿ. ಕೃಷ್ಣಕುಮಾರ್(36) ಮತ್ತು ಎಚ್ಡಿಎಫ್ಸಿ ಬ್ಯಾಂಕಿನ ಕಲೆಕ್ಟರ್ ಅರುಣ್(28) ಮೃತಪಟ್ಟವರು.
ನೇತ್ರಾವತಿ ಸೇತುವೆ ಮೇಲೆ ಮೀನು ಸಾಗಿಸುವ ಪಿಕ್-ಅಪ್ ವಾಹನ ಪಲ್ಟಿ ; ಚಾಲಕ ಪಾರು!
ರಜೆಯ ಕಾರಣ ಇಬ್ಬರೂ ಭಾನುವಾರ ಕುಟುಂಬ ಸಮೇತರಾಗಿ ಜೋಗ ನೋಡಲು ಪ್ರವಾಸಕ್ಕೆ ತೆರಳಿದ್ದರು. ಜೋಗ ಸನಿಹದ ದೇವಿ ಗುಂಡಿ ಬಳಿ ಈಜಲು ಹೋದಂತ ಸಂದರ್ಭದಲ್ಲಿ, ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ IDFC ಬ್ಯಾಂಕ್ ಕಲೆಕ್ಟರ್ ಅರುಣ್ ಮುಳುಗಿ ಸಾವನ್ನಪ್ಪಿದ್ದಾರೆ.
ಸೆ. 26ರಂದು ಬೆಂಗಳೂರು ಬಂದ್; 150ಕ್ಕೂ ಅಧಿಕ ಸಂಘಟನೆಗಳ ಜಂಟಿ ಕರೆ!
ಕಾರ್ಗಲ್ ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಮತ್ತು ಸಿಬಂದಿ ಘಟನೆಯ ಸ್ಥಳಕ್ಕೆ ತೆರಳಿ ಶವಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾಗರದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.