![1500 ರೂ. ಸಾಲ ವಾಪಸ್ ನೀಡಿದರೂ, ಹೆಚ್ಚು ಬಡ್ಡಿ ನೀಡುವಂತೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಬಾಯಿಗೆ ಮೂತ್ರ ಮಾಡಿದ ವ್ಯಕ್ತಿ..!](https://nimmondige24.com/wp-content/uploads/2023/09/226.jpg)
ಪಾಟ್ನಾ, ಸೆ.25: ಸಾಲ ಹಿಂದಿರುಗಿಸಿದ್ರೂ, ಹೆಚ್ಚಿನ ಬಡ್ಡಿ ನೀಡವಂತೆ ಒತ್ತಾಯಿಸಿ ದಲಿತ ಮಹಿಳೆ ಮೇಲೆ ಹಲ್ಲೆ ಮಾಡಿ, ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬಿಹಾರದ (Bihar) ಪಾಟ್ನಾ ಜಿಲ್ಲೆಯ ಮೋಸಿಂಪುರ ಗ್ರಾಮದಲ್ಲಿ ನಡೆದಿದೆ. ಸಾಲ ನೀಡಿದ ವ್ಯಕ್ತಿಗೆ ಹಣವನ್ನು ಹಿಂದಿರುಗಿಸಿದ್ರೂ ಮಹಿಳೆಗೆ ಹೆಚ್ಚಿನ ಬಡ್ಡಿ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಮಹಿಳೆ ನಿರಕಾರಿಸಿದ್ದು, ಇದರಿಂದ ಕೋಪಗೊಂಡ ಸಾಲ ನೀಡಿದ ವ್ಯಕ್ತಿ ಮಹಿಳೆಗೆ ಕ್ರೂರವಾಗಿ ಹಲ್ಲೆ ಮಾಡಿ, ವಿವಸ್ತ್ರಗೊಳಿಸಿದ್ದಾನೆ ಎಂದು ಹೇಳಲಾಗಿದೆ.
ನೇತ್ರಾವತಿ ಸೇತುವೆ ಮೇಲೆ ಮೀನು ಸಾಗಿಸುವ ಪಿಕ್-ಅಪ್ ವಾಹನ ಪಲ್ಟಿ ; ಚಾಲಕ ಪಾರು!
ಇನ್ನು ಸಾಲ ನೀಡಿದ ವ್ಯಕ್ತಿಯ ಮಗ ಮಹಿಳೆಯ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿ ಪಾಟ್ನಾ ಜಿಲ್ಲೆಯ ಮೋಸಿಂಪುರ ಗ್ರಾಮದ ಪ್ರಮೋದ್ ಸಿಂಗ್ ಅವರಿಂದ ₹ 1,500 ಸಾಲ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದಂಪತಿಗಳು ಸಾಲ ಪಡೆದ ಹಣವನ್ನು ಬಡ್ಡಿ ಸಹಿತ ಮರುಪಾವತಿ ಮಾಡಿದ್ದರು. ಆದರೆ ಪ್ರಮೋದ್ ಸಿಂಗ್ ಹೆಚ್ಚುವರಿ ಬಡ್ಡಿ ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ದಂಪತಿಗಳು ಒಪ್ಪದಿದ್ದಾಗ ಪ್ರಮೋದ್ ಸಿಂಗ್ನ ಮಗ ಮತ್ತು ಆತ ಸಹಾಯಕರು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ವರದಿ ಹೇಳಿದೆ.
ಶನಿವಾರ ರಾತ್ರಿ ಮನೆಯ ಹೊರಗೆ ನೀರು ತುಂಬಿಸುತ್ತಿರುವಾಗ ಪ್ರಮೋದ್, ಆತನ ಮಗ ಅಂಶು ಮತ್ತು ಇತರ ನಾಲ್ವರು ಪುರುಷರು ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸೆ. 26ರಂದು ಬೆಂಗಳೂರು ಬಂದ್; 150ಕ್ಕೂ ಅಧಿಕ ಸಂಘಟನೆಗಳ ಜಂಟಿ ಕರೆ!
ಮಹಿಳೆ ನಾನು ಎಲ್ಲಿಗೂ ಬರುವುದಿಲ್ಲ ಎಂದು ಹೇಳಿದಾಗ ಆಕೆಗೆ ದೊಣ್ಣೆಯಿಂದ ಥಳಿಸಿದ್ದು, ಗ್ರಾಮದ ಹೊರಗೆ ಕರೆದುಕೊಂಡು ಹೋಗಿ ಆಕೆಯನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ಪೊಲೀಸ್ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಪ್ರಮೋದ್ ಸಿಂಗ್ ತನ್ನ ಮಗ ಅಂಶುಗೆ ಮಹಿಳೆಯ ಬಾಯಿಗೆ ಮೂತ್ರ ಮಾಡು ಎಂದು ಹೇಳಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ನಂತರ ಮಹಿಳೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದಾಳೆ. ಇನ್ನು ಈಕೆ ಬೆತ್ತಲೆಯಾಗಿ ಓಡಿಕೊಂಡು ಬರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.