ಕಾಳು ಮೆಣಸು ಅಥವಾ ಕರಿಮೆಣಸು ಭಾರತದಲ್ಲಿ ಅತಿ ಹೆಚ್ಚು ರೈತರು ಈ ಕೃಷಿಯನ್ನು ಮಾಡುತ್ತಾರೆ. ಮುಖ್ಯವಾಗಿ ಸಾಂಬಾರ ಬೆಳೆಯಾಗಿದ್ದು. ವೈದ್ಯಶಾಸ್ತ್ರದಲ್ಲೂ ಕೂಡ ಇದರ ಉಪಯೋಗ ಅಪಾರ. ಇವು ಮರಗಳನ್ನೆ ಆಧಾರವಾಗಿಸಿಕೊಂಡು ಬಳ್ಳಿಗಳಾಗಿ ಎತ್ತರಕ್ಕೆ ಹಬ್ಬುತ್ತಾ ಹೋಗುತ್ತದೆ. ಬಳ್ಳಿಗಳು ಅಲ್ಲಲ್ಲಿ ಗಂಟು ಗಂಟಾಗಿರುತ್ತವೆ. ಮರದ ಅಪ್ಪುಗೆಯಿಂದ ಬೆಳೆಯುವುದರಿಂದ ಇದನ್ನು ‘ಅಪ್ಪು ಸಸ್ಯ’ ಎಂತಲೂ ಕರೆಯುತ್ತಾರೆ. ಇದರ ಬಳ್ಳಿ, ಎಲೆಗಳು ನೋಡೊಕೆ ವಿಳ್ಯದೆಲೆಯ ಆಕಾರವನ್ನೆ ಹೊಂದಿರುತ್ತದೆ. ಕರ್ನಾಟಕದಲ್ಲಿ ಹೆಚ್ಚಾಗಿ ಅಡಕೆ, ಕಾಫಿ ತೋಟದಲ್ಲಿ ಕಾಳು ಮೆಣಸು ಬೆಳೆಯಬಹುದು. ಕಾಳು ಮೆಣಸು…