ರಾಮನಗರ: ಸ್ನೇಹಕ್ಕಾಗಿ ಜೀವ ನೀಡಿರುವ ಘಟನೆ ಯನ್ನು ಕೇಳಿದ್ದೇವೆ. ಸ್ನೇಹಿತನಿಗೆ ಐಶ್ವರ್ಯವನ್ನು ನೀಡಿದ ಕೃಷ್ಣ-ಕುಚೇಲರ ಕಥೆ ಕೇಳಿದ್ದೇವೆ. ಸ್ನೇಹಿತನಿಗೆ ಸಾಮ್ರಾಜ್ಯ ನೀಡಿದ ದುರ್ಯೋದನ ಕರ್ಣನ ಕಥೆ ಯನ್ನು ಕೇಳಿದ್ದೇವೆ. ಹೀಗೆ ಸ್ನೇಹ ಕ್ಕಾಗಿ ಹಣ, ಒಡವೆ, ಭೂಮಿ, ಮನೆ ಹೀಗೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಕೆಲವನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಭೂಪ ಸ್ನೇಹಕ್ಕಾಗಿ ತನ್ನ ಪ್ರೇಯಸಿ ಯನ್ನೇ ಉಡುಗೊರೆಯಾಗಿ ನೀಡಿರುವ ಅಪರೂಪದ ಘಟನೆ ಐಜೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು.., ಅಂತಿಮ ವರ್ಷದ ಬಿ.ಕಾಂ. ಓದಲು ನಗರಕ್ಕೆ…